ಘೋರ ಅಂತ್ಯ
ಮಳೆಯೊಂದು ಭುವಿಗೆ ಇಳಿಯಿತು!
ಗುಡುಗು ಮಿಂಚಿನ ಜೊತೆಗಾರರೊಂದಿಗೆ, ಕವಿದ ಕಾರ್ಮೋಡವ ಛೇಧಿಸಿ, ಒಣಗಿ ಬರಿದಾದ ಭೂಮಿಯ ಮುತ್ತಿಕ್ಕಲು, ಮಳೆಯೊಂದು ಭುವಿಗೆ ಇಳಿಯಿತು!
ಮಳೆಯ ಜೊತೆ ಕೈಜೋಡಿಸಿದ ಬಿರುಗಾಳಿಯು, ಉಗ್ರ, ಉನ್ಮಾದದ ವೇಗವ ಪಡೆದು
ವಿಷಾದಕರ ವಿನಾಶನವನ್ನು ತಳೆದು, ಮಳೆಯೊಂದು ಭುವಿಗೆ ಇಳಿಯಿತು!
ಗುಡುಗಿನ ಘರ್ಜನೆಗೆ, ಮಿಂಚಿನ ವೇಗಕ್ಕೆ, ಗಾಳಿಯ ರಭಸಕ್ಕೆ,
ವಿಧಿಯ ಕ್ರೂರಕ್ಕೆ, ಅದೆಷ್ಟೋ ಮರಗಳು ಧರೆಗೆ ಉರುಳಿ ತಮ್ಮ ಪ್ರಾಣವ ತೆತ್ತವು!!
ಮಳೆಯೊಂದು ಭುವಿಗೆ ಇಳಿಯಿತು! ಗರಗಸದೊಂದಿಗೆ ವಿಷಾದದ ಸರಸ
ಪ್ರಾಣ ತೆತ್ತರು ಬಿಡಲಿಲ್ಲ ಕ್ರೂರ ಮಾನವರು,
ಸಾವಿನಲ್ಲೂ ಸಹ, ಅವುಗಳು ಮತ್ತಷ್ಟು ಕ್ರೌರ್ಯವನ್ನು ಎದುರಿಸಿದವು!
ದಯೆ ನಿರತ ಕೊಡಲಿ ಪೆಟ್ಟು ಹಾಗು ಗರಗಸದೊಂದಿಗೆ ವಿಷಾದದ ಸರಸವೂ ಹೌದು
ಮಳೆಯೊಂದು ಭುವಿಗೆ ಇಳಿಯಿತು! ಚಿತೆಯ ಜ್ವಾಲೆಗಳಲ್ಲಿ ಘೋರ ಅಂತ್ಯ
ಇಲ್ಲಿಗೆ ನಿಲ್ಲದ ಮರುಕವಿಲ್ಲದ ಮನುಜರು, ಅವುಗಳನ್ನು ಕಡಿದು ಅವುಗಳಿಂದ ಲಾಭವ ಕಂಡರು, ಮನುಷ್ಯರ ಹಣದ ದಾಹಕ್ಕೆ ಇವುಗಳು ಕಟ್ಟಿಗೆಯಾದವು, ಬಡವನ ಮನೆಯಲ್ಲಿ ಒಲೆಯ ಕೆನ್ನಾಲಿಗೆಗೆ ಸೌದೆಯಾದವು, ಆಗರ್ಭ ಶ್ರೀಮಂತರ ಮನೇಲಿ ಮೈ ಬೆಚ್ಚಗೆ ಮಾಡುವ ಉರುವಲುವಾದವು, ಹೃದಯ ವಿದ್ರಾವಕ ಸಂಗತಿಯೆಂದರೆ, ಮನುಷ್ಯನ ಶವದೊಂದಿಗೆ ಮಸನದಲ್ಲಿ ಚಿತೆಯ ಜ್ವಾಲೆಗಳಲ್ಲಿ ಘೋರ ಅಂತ್ಯವನ್ನು ಕಂಡವು!!
ಮಳೆಯೊಂದು ಭುವಿಗೆ ಇಳಿಯಿತು!
ಇತಿ,
ವಸಂತ್ ಕುಮಾರ್ .ಜೆ
Comments
Post a Comment